PHOTO page
     ABOUT ANUDINA
     UPDATE NEWS
     BALLARI NEWS
     ANUDINA Video


ಅನುದಿನ


ಅನುದಿನ - BALLARI NEWS


                            ಶುಕ್ರವಾರ ಏಪ್ರಿಲ್ 18 2025
          

ರೈತರ ಧರಣಿ; ಸಚಿವರೊಂದಿಗೆ
ಶಾಸಕ ನಾರಾ ಭರತ್ ರೆಡ್ಡಿ
ಮಾತುಕತೆ, ಕ್ರಮದ ಭರವಸೆ

ಬಳ್ಳಾರಿ ಏ 17 ಅನುದಿನ: ಹಿಂಗಾರು ಹಂಗಾಮಿನ ಅವಧಿಯಲ್ಲಿ ಬೆಳೆದಿದ್ದ ಜೋಳವನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಲು ನಿಗದಿಪಡಿಸಿದ್ದ ಮಿತಿಯನ್ನು ಹೆಚ್ಚಳಗೊಳಿಸುವಂತೆ ಶಾಸಕ ನಾರಾ ಭರತ್ ರೆಡ್ಡಿ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಫೋನ್ ಮೂಲಕ ಮನವಿ ಮಾಡಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಿರತ ರೈತರನ್ನು ಗುರುವಾರ ಸಂಜೆ ಭೇಟಿ ಮಾಡಿದ ಶಾಸಕ ನಾರಾ ಭರತ್ ರೆಡ್ಡಿ ರೈತರ ಮನವಿಯನ್ನು ಪುರಸ್ಕರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಹೆಚ್.ಮುನಿಯಪ್ಪ ಅವರಿಗೆ ಫೋನ್ ಮೂಲಕ ಮಾತಾಡಿ ಕೋರಿದರು. ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
 
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿಯ ಎದುರು ಬೆಳಿಗ್ಗೆಯಿಂದ ಧರಣಿ ಕೂತಿದ್ದರು. ಧರಣಿ ನಿರತ ರೈತರನ್ನು ಭೇಟಿ ಮಾಡಿದ ಶಾಸಕ ನಾರಾ ಭರತ್ ರೆಡ್ಡಿ ಅಹವಾಲು ಸ್ವೀಕರಿಸಿ ಸಚಿವರೊಂದಿಗೆ ಮಾತನಾಡಿದರು.
 
ರೈತ ಮುಖಂಡರಾದ ಮಾಧವ ರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ, ಲೇಪಾಕ್ಷಿ, ವೀರಭದ್ರ ರೆಡ್ಡಿ ಅವರ ನೇತೃತ್ವದಲ್ಲಿ ನೂರಾರು ರೈತರು ಧರಣಿ ಕೂತಿದ್ದರು. ಶಾಸಕರ ಭರವಸೆ ಮೇರೆಗೆ ಪ್ರತಿಭಟನಾ ಧರಣಿ ಹಿಂಪಡೆಯಲಾಯಿತು.




 
....................................................................
ANUDINA Kannada News Website.
for latest news and reports, insightful analyses,
on politics, policy, governance, Social and cultural change These are the four pillars of ANUDINA - a new media platform where readers come for daily news.
Founder /Editor-in-Chief:Ganesh Inamdar.Journalist.Karnataka.
Founded-JUL/1/2016.Contacts: 9886667478
E-mail: ptiganesh.bly@gmail.com 
© 2024 webme GmbH, Germany, All rights reserved.
Today, there have been 5 visitors (5 hits) on this page!

This website was created for free with Own-Free-Website.com. Would you also like to have your own website?
Sign up for free